ವಿವಾದದ ಬಳಿಕ 5 ದಿನಗಳಲ್ಲಿ ತಿರುಪತಿಯಲ್ಲಿ ಮಾರಾಟವಾದ ಲಡ್ಡುಗಳ ಸಂಖ್ಯೆ ಎಷ್ಟು? ನಿಮಗೂ ಅಚ್ಚರಿ ಆಗುವುದು ಸತ್ಯ.

ಜಗನ್ ಮೋಹನ್ ರೆಡ್ದಿ ನೇತೃತ್ವದ ಸರ್ಕಾರದ ಅಧರ್ಮಿಯ ಕೆಲಸದಿಂದ ತಿರುಪತಿ ದೇವಸ್ಥಾನದಲ್ಲಿ ಅಚಾತುರ್ಯ ಘಟನೆ ನಡೆದದ್ದು ಎಲ್ಲರಿಗೂ ಗೊತ್ತು. ಚಂದ್ರಬಾಬು ನಾಯ್ಡು ಅವರು ಈ ವಿಚಾರವಾಗಿ ಪತ್ರಿಕಾ ಗೋಷ್ಟಿ ಕೂಡ ನಡೆಸಿದ್ದರು. ಇದಾದ ಬಳಿಕ ಎಲ್ಲಾ ಭಕ್ತರಲ್ಲಿ ಅಸಮಾಧಾನ ಬಂದಿದ್ದು ಸುಳ್ಳಲ್ಲ. ಜಗನ್ ವಿರುದ್ಧ ದೇಶ ವ್ಯಾಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆ ಬಳಿಕ ಈ ಒಂದು ಲಡ್ಡು ಪ್ರಸಾದ ಮಾರಾಟ ಕಡಿಮೆ ಆಗುತ್ತದೆ ಎಂಬ ಮಾತುಗಳು ಎಲ್ಲಾ ಕಡೆ ಇತ್ತು. ಆದರೆ ಅದು ಹಾಗಲಿಲ್ಲ್ಲ . ದೇವಸ್ಥಾನ ಲಡ್ಡು ತಯಾರಿಕಾ ಕೊಠಡಿ ಶುದ್ಧೀಕರಣ ನಂತರ ಇದು ಮತ್ತಷ್ಟು ಹೆಚ್ಚಾಗಿದೆ. ಹೌದು ಅಚ್ಚರಿ ಎನಿಸಿದರೂ ಸತ್ಯ. ಇದೆಲ್ಲ ಆ ತಿಮ್ಮಪ್ಪನ ಲೀಲೆ ಎಂದರು ತಪ್ಪಾಗಲಿಕ್ಕಿಲ್ಲ.

ಸೆಪ್ಟೆಂಬರ್ 19 ರಂದು 3.59 ಲಕ್ಷ ಲಡ್ಡುಗಳು ಮಾರಾಟ ಆಗಿದೆ. ಇನ್ನುಳಿದಂತೆ ಸೆಪ್ಟೆಂಬರ್ 20 ರಂದು 3.17ಲಕ್ಷ, 21 ರಂದು 3.67 ಲಕ್ಷ, 22 ರಂದು 3.60ಲಕ್ಷ, ಅಂದರೆ ಪ್ರತಿ ದಿನ ಅಂದಾಜು 3 ಲಕ್ಷ ಲಾಡುಗಳು ಮಾರಾಟವಾಗಿದೆ. ಒಟ್ಟಾರೆಯಾಗಿ 5 ದಿನಗಳ ಕಾಲದಲ್ಲಿ ಬರೋಬ್ಬರಿ 16 ಲಕ್ಷಕ್ಕೂ ಹೆಚ್ಚು ಲಾಡುಗಳ ಮಾರಾಟವಾಗಿದೆ. ಇಲ್ಲಿನ ಲಡ್ಡು ಪ್ರಸಾದ ಬಹಳ ಫೇಮಸ್ . ಇದರ ಸುವಾಸನೆ ರುಚಿ ಮತ್ತೆಲ್ಲೂ ಸಿಗುವುದಿಲ್ಲ. ಆದರೆ ಆ ಒಂದು ಘಟನೆ ಇಂದ ಎಲ್ಲವೂ ಮೇಲೆಕೆಳಗೆ ಆಗುವುದು ಎಂಬ ಲೆಕ್ಕಾಚಾರ ಹಾಕಿದ್ದರು ಕೂಡ ಭಗವಂತ ಹಾಗಾಗಲು ಬಿಡಲಿಲ್ಲ ಎನ್ನುತ್ತಾರೆ ದೇವಸ್ಥಾನದ ಭಕ್ತರು.

ಈಗಲೂ ಶುದ್ಧಿ ಕಾರ್ಯಕ್ರಮ ಹೋಮ ಹವನ ವ್ರತಾಚರಣೆ ಇತ್ಯಾದಿ ಗಳು ನಡೆಯುತ್ತಲೇ ಇದೆ . ದೇವಸ್ಥಾನದ ಲಡ್ಡು ತಯಾರಿಗೆ ಬೇಕಾದ ಕಡಲೆಬೇಳೆ, ಸಕ್ಕರೆ, ಗೋಡಂಬಿ, ಸುಮಾರು 15,000 ಕೆಜಿ ತುಪ್ಪವನ್ನು ಹೊಸತಾಗಿ ತರಿಸಿ ಮಾಡಲಾಗುತ್ತಿದ್ದು. ಹಿಂದೆ ಉಳಿದಿದ್ದ ಎಲ್ಲಾ ವಸ್ತುಗಳನ್ನು ಬಳಸಿಕೊಳ್ಳಲಿಲ್ಲ . ಇದೆ ರೀತಿ ಇನ್ನಷ್ಟು ಭಕ್ತರ ಸಂಖ್ಯೆ ಹೆಚ್ಚಿದ್ದು ಈ ಸಂಖ್ಯೆ ಇನ್ನಷ್ಟು ಹೆಚ್ಚಾದರೂ ಅಚ್ಚರಿ ಇಲ್ಲ. ದೇವರ ಅಪವಿತ್ರ ಗೊಳಿಸಿ ಭಕ್ತರ ಭಾವನೆ ಜೊತೆ ಆಟ ಆಡಿದ ಜಗನ್ ಗೆ ದೇವರೇ ಒಂದು ಗತಿ ಕಾಣಿಸುತ್ತಾರೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

Chandrabaabu ನಾಯ್ಡುLadduTirupatiTirupati ladduಜಗನ್ ಮೋಹನ್ ರೆಡ್ಡಿ
Comments (0)
Add Comment