ಅಸಂ’ಘಟಿತ ಕಾರ್ಮಿಕ ವರ್ಗಕ್ಕೆ ಮೋದಿ ಸರ್ಕಾರದಿಂದ ಶುಭ ಸುದ್ದಿ ಏನಿದು ಹೊಸ ಯೋಜನೆ ??

ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಯೋಜನೆ ಅಸಂ’ಘಟಿತ ಕಾರ್ಮಿಕರ ನೋಂದಣಿ. ಹೌದು ಸರ್ಕಾರ ಅಸಂ’ಘಟಿತ ಕಾರ್ಮಿಕರ ಡಾಟಾ ಬೇಸ್ ಒಂದನ್ನು ತಯಾರಿಸುವ ಮಹತ್ವದ ಯೋಜನೆಗೆ ಮುಂದಾಗಿದೆ. ಇದರಿಂದಾಗಿ ಅಸಂಘಟಿತ ಕಾರ್ಮಿಕರ ಯೋಜನೆಗಳೂ ನೇರವಾಗಿ ಅವರಿಗೆ ತಲುಪುತ್ತದೆ. ಮತ್ತು ಯಾರು ಕೂಡ ಇದರಿಂದಾಗಿ ವಂ’ಚಿತರಾಗುತರಾಗುವುದಿಲ್ಲ.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇ-ಶ್ರಮ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ, ಅದನ್ನು ಅವರ ಆಧಾರ್ ಕಾರ್ಡ್‌ಗಳೊಂದಿಗೆ ಸೀಡ್ ಮಾಡಲಾಗುತ್ತದೆ.ದೇಶದಲ್ಲಿ 38 ಕೋಟಿಗೂ ಹೆಚ್ಚು ಅಸಂ’ಘಟಿತ ಕಾರ್ಮಿಕರನ್ನು(UW) ಒಂದೇ ಪೋರ್ಟಲ್ ಅಡಿಯಲ್ಲಿ ನೋಂದಾಯಿಸಲಾಗುತ್ತದೆ. ಇ-ಶ್ರಮ್ ಪೋರ್ಟಲ್ ಅಡಿಯಲ್ಲಿ ನೋಂದಣಿ ಸಂಪೂರ್ಣವಾಗಿ ಉಚಿತವಾಗಿದೆ. ಕಾಮನ್ ಸರ್ವೀಸ್ ಸೆಂಟರ್(ಸಿ.ಎಸ್.ಸಿ.)ಗಳಲ್ಲಿ ಅಥವಾ ಎಲ್ಲಿಯಾದರೂ ನೋಂದಣಿ ಮಾಡಬಹುದು. ಮತ್ತು ಇದಕ್ಕಾಗಿ ಯಾವುದೇ ಹಣ ಪಾವತಿಸಬೇಕಾಗಿಲ್ಲ.

ನೋಂದಣಿ ಮಾಡಿಕೊಂಡ ನಂತರ ಅವರಿಗೆ ಒಂದು ವಿಶಿಷ್ಟ ನೋಂದಣಿ ಸಂಖ್ಯೆ ಸಿಗುತ್ತದೆ. ಇದನ್ನು ಸಾರ್ವತ್ರಿಕ ಖಾತೆ ಸಂಖ್ಯೆ (ಯು ಎ ಎನ್) ನೀಡಲಾಗುತ್ತದೆ.ಅವರು ಈ ಕಾರ್ಡ್ ಮೂಲಕ ಎಲ್ಲಿಯಾದರೂ ವಿವಿಧ ಸಾಮಾಜಿಕ ಭ’ದ್ರತಾ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು. ಇದು ಹೆಸರು, ಉದ್ಯೋಗ, ವಿಳಾಸ, ಶೈಕ್ಷಣಿಕ ಅರ್ಹತೆ, ಕೌಶಲ್ಯ ಪ್ರಕಾರಗಳು ಮತ್ತು ಕುಟುಂಬದ ವಿವರಗಳು ಇತ್ಯಾದಿ ವಿವರಗಳನ್ನು ಹೊಂದಿರುತ್ತದೆ. ಅವರ ಉದ್ಯೋಗದ ಮಾಹಿತಿ ಮತ್ತು ಸಾಮಾಜಿಕ ಭ’ದ್ರತಾ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದು ವಲಸೆ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಪ್ಲಾಟ್‌ಫಾರ್ಮ್ ಕೆಲಸಗಾರರು ಮತ್ತು ಇತರರು ಸೇರಿದಂತೆ ಅಸಂ’ಘಟಿತ ಕಾರ್ಮಿಕರ ಮೊದಲ ರಾಷ್ಟ್ರೀಯ ಡೇಟಾಬೇಸ್ ಆಗಿದೆ.

ಎಲ್ಲಾ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ಒಂದು ವರ್ಷದವರೆಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(PMSBY) ಮೂಲಕ ಆಕ’ಸ್ಮಿಕ ವಿಮಾ ರಕ್ಷ’ಣೆಯನ್ನು ಒದಗಿಸಲಾಗುವುದು. ಯಾವುದೇ ಸಾಂಕ್ರಾಮಿಕ/ ವಿ’ಪತ್ತುಗಳ ಸಂದರ್ಭದಲ್ಲಿ ಅರ್ಹ ಯುಡಬ್ಲ್ಯೂಗಳಿಗೆ ನೆರವು ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಹಕಾರಿಯಾಗುತ್ತದೆ. ಆಗಸ್ಟ್ 26 ರಿಂದ ನೋಂದಣಿ ಆರಂಭವಾಗಿದೆ.

ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸಗಾರರು, ಹೈನುಗಾರಿಕೆ ಕಾರ್ಮಿಕರು, ಟ್ರಕ್ ಚಾಲಕರು, ಮೀನುಗಾರರು, ಕೃಷಿ ಕಾರ್ಮಿಕರು ಮತ್ತು ಇತರ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್‌ನಲ್ಲಿ ಒಳಪಡಿಸಲಾಗುತ್ತದೆ. ಆಗಸ್ಟ್ 26 ರಂದು ಕಾರ್ಮಿಕ ಮತ್ತು ಉದ್ಯೋಗ ಮಂತ್ರಿ ಭೂಪೇಂದರ್ ಯಾದವ್ ಇ-ಶ್ರಮ ಪೋರ್ಟಲ್ ಗೆ ಚಾಲನೆ ನೀಡಿದ್ದು, ರಾಜ್ಯ ಕಾರ್ಮಿಕ ಮತ್ತು ಉದ್ಯೋಗ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿಯವರ ಸಮ್ಮುಖದಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಹಸ್ತಾಂತರಿಸಿದ್ದಾರೆ.

e-shram
Comments (0)
Add Comment