ನಾವು ಸಾಮಾನ್ಯವಾಗಿ ಕೇಳಿದ ಮಹಾಭಾರತದ ಊರುಗಳು ಇಂದು ಎಲ್ಲಿವೆ? ಯಾವ ಹೆಸರಲ್ಲಿದೆ ಗೊತ್ತೇ?

ಮಹಾಭಾರತ ಹಿಂದುಸ್ತಾನದ ಬಹಳ ಮುಖ್ಯ ಘಟನೆಗಳಲ್ಲಿ ಒಂದಾಗಿದೆ. ಮಹಾವಿಷ್ಣುವಿನ ದಶಾವತಾರದಲ್ಲಿ ಪ್ರಭು ಶ್ರೀ ರಾಮನ ನಂತರ ಅತಿ ಹೆಚ್ಚು ಪೂಜನೀಯ ಅವತಾರ ದ್ವಾಪರ ಯುಗದ ಕೃಷ್ಣಾವತಾರ. ಇದೆ ಸಮಯದಲ್ಲಿ ಮಹಾಭಾರತ ನಡೆದದ್ದು. ಜನರ ಜೀವನದಲ್ಲಿ ಬದಲಾವಣೆ ತಂದ ಶ್ರೀ ಕೃಷ್ಣನ ಭಗವದ್ಗೀತೆ ಭೋದನೆ. ಹಿಂದೂಗಳು ಮಾತ್ರವಲ್ಲದೆ ಪ್ರತಿಯೊಬ್ಬರೂ ಓದಲೇ ಬೇಕಾದಂತಹ ಗೀತೆ. ಹಿಂದುಸ್ತಾನ ಅಂದರೆ ಇಂದಿನ ಕೇವಲ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮಾತ್ರವಲ್ಲ ಅಖಂಡ ಭಾರತವಾಗಿತ್ತು. ಆಫ್ಘಾನಿಸ್ತಾನ, ಇಂಡೋನೇಷ್ಯಾ, ಎಲ್ಲವು ಭಾರತಕ್ಕೆ ಸೇರಿತ್ತು. ಮಹಾಭಾರತದಲ್ಲಿ ನಾವು ಅತಿ ಹೆಚ್ಚು ಕೇಳುವ ಪ್ರದೇಶಗಳು ಇಂದು ಯಾವ ಹೆಸರಲ್ಲಿದೆ?

ಮಹಾಭಾರತದಲ್ಲಿ ನೀವು ಕೇಳಿದ ಹಲವಾರು ನಗರಗಳು ಇಂದು ಎಲ್ಲೆಲ್ಲ ಇವೆ ಎಂದು ತಿಳಿದರೆ ನಿಮಗೂ ಆಶ್ಚರ್ಯವಾಗುತ್ತದೆ. ಏಕೆಂದರೆ ಅವು ಪಾಕಿಸ್ತಾನದಿಂದ ಹಿಡಿದು ಪಂಜಾಬ್‌ವರೆಗೆ, ಉತ್ತರಪ್ರದೇಶದಿಂದ ಅಸ್ಸಾಂವರೆಗೂ ಹಬ್ಬಿಕೊಂಡಿವೆ. ಮಹಾಭಾರತದ ಯುದ್ಧಭೂಮಿ, ಕುರುಕ್ಷೇತ್ರವು ಪಂಜಾಬಿನ ಅಂಬಾಲ ನಗರದ ಪೂರ್ವಕ್ಕೆ 50 ಕಿಮೀ ದೂರದ ಹರಿಯಾಣದಲ್ಲಿದೆ. ಗಾಂಧಾರ ದೇಶದ ರಾಜಧಾನಿ ತಕ್ಷಶಿಲಾ ಪಾಕಿಸ್ತಾನದ ಪ್ರಸ್ತುತ ರಾವಲ್ಪಿಂಡಿ ಬಳಿ ಇದೆ. ಈಗಿನ ದಕ್ಷಿಣ ಬಿಹಾರವನ್ನು ಮಹಾಭಾರತದಲ್ಲಿ ಜರಾಸಂಧ ಆಳುತ್ತಿದ್ದಾಗ ಮಗಧ ಎಂದು ಕರೆಯಲಾಗುತ್ತಿತ್ತು.

ಮಹಾಭಾರತದ ಭವ್ಯ ನಗರ ಮತ್ತು ಕೌರವರು ಮತ್ತು ಪಾಂಡವರ ರಾಜಧಾನಿ, ಹಸ್ತಿನಾಪುರವು ಪ್ರಸ್ತುತ ಉತ್ತರ ಪ್ರದೇಶದ ಮೀರತ್‌ನಲ್ಲಿದೆ. ಗುರು ದ್ರೋಣಾಚಾರ್ಯರು ಪಾಂಡವರು ಮತ್ತು ಕೌರವರಿಗೆ ಬಿಲ್ಲುಗಾರಿಕೆ ಕಲಿಸಿದ ಸ್ಥಳ, ಉತ್ತರಾಖಂಡದ ನೈನಿತಾಲ್‌ನ ಆಧುನಿಕ ಕಾಶಿಪುರದ ಸಮೀಪದಲ್ಲಿತ್ತು. ಪ್ರಸ್ತುತ ನವದೆಹಲಿಯ ದಕ್ಷಿಣ ಭಾಗ ಪಾಂಡವರ ಇಂದ್ರಪ್ರಸ್ಥವಾಗಿತ್ತು. ಶ್ರೀಕೃಷ್ಣನು ತನ್ನ ಬಾಲ್ಯವನ್ನು ಕಳೆದ ಸ್ಥಳವೆಂದರೆ ವೃಂದಾವನ.ಇದು ಉತ್ತರ ಪ್ರದೇಶದ ಮಥುರಾದಿಂದ 10 ಕಿಮೀ ದೂರದಲ್ಲಿದೆ. ಮಥುರಾ ಗುಜರಾತ್‌ನ ಪಶ್ಚಿಮ ಕರಾವಳಿಯಲ್ಲಿದೆ. ಈಗಿನ ದಕ್ಷಿಣ ಬಿಹಾರವನ್ನು ಮಹಾಭಾರತದಲ್ಲಿ ಜರಾಸಂಧ ಆಳುತ್ತಿದ್ದಾಗ ಮಗಧ ಎಂದು ಕರೆಯಲಾಗುತ್ತಿತ್ತು. ಕೌಶಂಬಿಯು ಗಂಗಾ ನದಿಯ ದಕ್ಷಿಣಕ್ಕೆ ಉತ್ತರ ಪ್ರದೇಶದ ಪ್ರಯಾಗರಾಜ್ ಬಳಿ ಇದೆ. ಇದು ಮಹಾಭಾರತ ಕಾಲದಲ್ಲಿ ವತ್ಸ ದೇಶಕ್ಕೆ ರಾಜಧಾನಿಯಾಗಿತ್ತು.

mahabharata
Comments (0)
Add Comment