ಭಾರತದ ಸಂಸ್ಕೃತಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವಂತದ್ದು. ಅದೆಷ್ಟೋ ರೀತಿಯ ಆಚರಣೆಗಳು ನಮ್ಮಲ್ಲಿ ಇವೆ. ಪ್ರದೇಶದಿಂದ ಪ್ರದೇಶಕ್ಕೆ, ಜನರಿಂದ ಜನಕ್ಕೆ, ಜಾತಿ ಧರ್ಮ ಲೆಕ್ಕ ಹಿಡಿದರೆ ಲೆಕ್ಕ ಹಿಡಿಯದಷ್ಟು ಆಚರಣೆಗಳು ಭಾರತ ದೇಶದಲ್ಲಿದೆ. ಆದರೆ ಅವೆಲ್ಲದರಲ್ಲಿ ಈ ಒಂದು ದೇವಸ್ಥಾನ ಬಹಳ ವಿಭಿನ್ನ. ಇಲ್ಲಿ ಮನುಷ್ಯರ ಜೊತೆ ಜೊತೆಗೆ ನಾಯಿಗಳು ಕೂಡ ದೇವರ ಭಕ್ತರು. ಮನುಷ್ಯರಂತೆ ನಾಯಿಗಳು ಕೂಡ ಈ ದೇವಸ್ಥಾನದ ಒಳಗೆ ಬರಬಹುದು. ಎಲ್ಲಿಯೂ ಯಾವುದೇ ರೀತಿಯ ನಿರ್ಬಂಧ ಇಲ್ಲಿ ಇಲ್ಲ. ಬಂದ ಎಲ್ಲಾ ನಾಯಿಗಳಿಗೆ ಮನುಷ್ಯರಂತೆ ಪ್ರಸಾದ ಕೊಡಲಾಗುತ್ತದೆ. ಕೇಳಿಸಲು ವಿಚಿತ್ರ ಎನಿಸಿದರು ಇದು ಸತ್ಯದ ಸಂಗತಿ. ಈ ಆಚರಣೆ ನಡೆಯುವುದು ನಮ್ಮ ಪಕ್ಕದ ರಾಜ್ಯ ಕೇರಳದಲ್ಲಿ. ಹೌದು ಏನಿದು ಆಚರಣೆ, ಈ ದೇವಸ್ಥಾನದಲ್ಲಿ (Temple) ನಾಯಿಗಳಿಗೆ ಏನು ಕೆಲಸ, ಈ ದೇವಸ್ಥಾನದಲ್ಲಿ ನಾಯಿಗಳಿಗೆ ಅಷ್ಟೊಂದು ಮರ್ಯಾದೆ ಏಕೆ, ಇಲ್ಲಿ ನಾಯಿಯ ಮೂರ್ತಿಗಳು ಕೂಡ ಇವೆ ಬನ್ನಿ ಇದರ ಬಗ್ಗೆ ತಿಳಿಯೋಣ.
ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲಿ ಪರಸಿನ ಕಡವು ಎಂಬ ದೇವಸ್ಥಾನ (Temple) ಇದೆ. ಇಲ್ಲಿ ಮುತ್ತಪ್ಪನ್ ಎಂಬ ದೇವರೂಪಿ ಶಕ್ತಿಯನ್ನು ಆರಾಧನೆ ಮಾಡುತ್ತಾರೆ. ಪರಶಿವನ ಅವತಾರ ಎಂದು ನಂಬಿಕೆ ಇದೆ. ಹಾಗಾದರೆ ಇಲ್ಲಿ ನಾಯಿಗಳಿಗೆ ಅಷ್ಟೊಂದು ಮಹತ್ತರ ಸ್ಥಾನಮಾನ ಇದೆ. ಮುತ್ತಪ್ಪನ್ ದೈವ ಸದಾ ನಾಯಿಗಳ ಜೊತೆಗೆ ಇರುತ್ತಾರೆ ಎಂಬ ನಂಬಿಕೆ ಇದೆ. ಊರಿನ ಹಿರಿಯರು ಹೇಳುವ ಪ್ರಕಾರ ಮುತ್ತಪ್ಪನ್ ಶಿವನ ಅವತಾರವಾಗಿದ್ದು ಭೂಮಿಯ ಮೇಲೆ ಎಲ್ಲರೂ ಆತನ ಶಕ್ತಿ ತಿಳಿಯುವ ಮುನ್ನ ಆತನನ್ನು ನಿಷ್ಟೂರವಾಗಿ ಕಾಣುತ್ತಿದ್ದರು. ಯಾರೇ ಏನೇ ಹೇಳಿದರೂ ಎಷ್ಟೇ ದೂರ ಮಾಡಿದರು ನಾಯಿಗಳು ಅವನ ಜೊತೆ ಸದಾ ಇರುತ್ತಿತ್ತು. ಹಾಗಾಗಿ ಮುತ್ತಪ್ಪನ್ ದೈವಕ್ಕೂ ಕೂಡ ನಾಯಿಗಳು ಎಂದರೆ ಪಂಚಪ್ರಾಣ. ಇಲ್ಲಿ ನಾಯಿಗಳ ನಾಮಕರಣ ಕೂಡ ಮಾಡಲಾಗುತ್ತದೆ.

ದೈವಸ್ಥಾನದ (temple) ಹೊರಗೆ ನಾಯಿಯ ಕಂಚಿನ ಪ್ರತಿಮೆ ಕೂಡ ಇದೆ. ಇಲ್ಲಿ ನಾಯಿಗಳಿಗೂ ಕೂಡ ಪ್ರಸಾದ ವಿತರಣೆ ನಡೆಯುತ್ತದೆ. ಪ್ರತಿ ದಿನ ಇಲ್ಲಿ ದೈವಗಳ ತೆಯ್ಯಮ್ ಕುಣಿತ ನಡೆಯುತ್ತದೆ. ವರ್ಷದ 365 ದಿನಗಳು ಕೂಡ ನಾಯಿಗಳಿಗೆ ಯಾವುದೇ ರೀತಿಯ ನಿರ್ಬಂಧ ಇಲ್ಲ. ಇಲ್ಲಿ ಯಾವುದೇ ರೀತಿಯ ವೈದಿಕ ಆಚರಣೆಗಳು ಇರುವುದಿಲ್ಲ. ಇಲ್ಲಿ ದೈವಕ್ಕೆ ಕಳ್ಳು ಮತ್ತು ಮೀನನ್ನು ಹರಕೆ ರೂಪದಲ್ಲಿ ಸಂದಾಯ ಮಾಡುತ್ತಾರೆ. ಶಿವನನ್ನು ಪಶುಪಾತಿನಾಥ ಅಂತಲೂ ನಾವು ಕರೆಯುತ್ತೇವೆ. ಅದಕ್ಕೆ ನೈಜ ರೂದ ಉದಾಹರಣೆ ಅಂತಿದೆ ಈ ಮುತ್ತಪ್ಪನ್ ದೇವಸ್ಥಾನ. ಅಷ್ಟೆ ಅಲ್ಲದೆ ಇಲ್ಲಿ ತೆಯ್ಯಮ್ ಆಟ ಆಗುವಾಗಲೂ ನಾಯಿಗಳು ಭಾಗಿ ಆಗುತ್ತದೆ ಬಂದು ಕೂತು ನೋಡುತ್ತವೆ, ನೋಡುವವರ ಕಣ್ಣಿಗೆ ಇದು ನಾಯಿಗಳು ಮುತ್ತಪ್ಪನ್ ದೈವದ ಸ್ಮರಣೆ ಮಾಡುವಂತೆ ಗೋಚರಿಸುತ್ತದೆ. ಅದೇನೇ ಇರಲಿ ಪ್ರತಿಯೊಂದು ಜೀವಿಗೂ ಭಗವಂತ ಹತ್ತಿರ. ಈ ವಿಚಾರ ಹೊಸದು ಎಂದೆಂಸಿದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿರಿ.