Puri Jagannath: ಪುರಿ ಜಗನ್ನಾಥ ರಥಯಾತ್ರೆ ಹಿಂದೂಗಳ ಅತ್ಯಂತ ಹಳೆಯ ಹಾಗು ಮತ್ತು ದೊಡ್ಡ ರಥ ಯಾತ್ರೆಯಾಗಿದೆ. ಆಷಾಡ ಮಾಸದ ಜೂನ್ ಹಾಗು ಜೂಲೈ ತಿಂಗಳಲ್ಲಿ ಬರುತ್ತದೆ. ಜಗನ್ನಾಥ ತನ್ನ ಸಹೋದರ ಹಾಗು ಸಹೋದರಿ ರಥ ಯಾತ್ರೆ ಮೂಲಕ ಭಕ್ತರಿಗೆ ತನ್ನ ದರ್ಶನವನ್ನು ನೀಡುತ್ತಾರೆ. ಈ ಯಾತ್ರೆ ಬಹಳ ಸಂಭ್ರಮ ಹಾಗು ವೈಭವದಿಂದ ನಡೆಯುತ್ತದೆ.
ಪುರಿ ಜಗನ್ನಾಥನಿಗೆ ಸಂಬಂಧಿಸಿದಂತೆ ಅನೇಕ ವಿಸ್ಮಯಗಳು ಇಂದಿಗೂ ನಡೆಯುತ್ತದೆ. ಈ ವಿಷಯಗಳು ನಿಮ್ಮನ್ನು ವಿಸ್ಮಯಗೊಳಿಸಬಹುದು.
- ದಿಕ್ಕಿಗೆ ವಿರುದ್ಧ ಜಗನ್ನಾಥನ ಗೋಪುರದ ಮೇಲಿರುವ ದ್ವಜ ಸದಾ ಬೀಸುತ್ತಿರುತ್ತದೆ. ಇದನ್ನು ದೈವಿಕ ಕ್ರಿಯೆ ಎಂದೇ ಭಾವಿಸಲಾಗುತ್ತದೆ. ಈ ದ್ವಜವನ್ನು ದಿನಾಲೂ ಗೋಪುರದ ಮೇಲೇರಿ ಕಟ್ಟಲಾಗುತ್ತದೆ. ಈ ದ್ವಜ ಹಾರುವುದು ನಿಜಕ್ಕೂ ವಿಸ್ಮಯದ ಸಂಗತಿ.
- ನೀಲಾಚಕ್ರ – 2000 ವರ್ಷಗಳ ಹಿಂದೆ ದೇವಾಲಯದ ಮೇಲ್ಬಾಗದಲ್ಲಿ ಸ್ಥಾಪಿಸಲಾದ 20 ಅಡಿ ಎತ್ತರದ ಬ್ರಹತ್ ಚಕ್ರವು ನಗರದ ಯಾವುದೇ ಮೂಲೆಯಿಂದ ನೋಡಿದರು ಗೋಚರಿಸುತ್ತದೆ. ದೇವಾಲಯದ ವಿನ್ಯಾಸವೇ ಅನೇಕರಿಗೆ ನಿಗೂಢವಾಗಿದೆ. ಈ 20 ಅಡಿ ಎತ್ತರದ ಚಕ್ರ 1 ಟನ್ ತೂಕವಿದೆ ಎಂದು ನಂಬಲಾಗಿದೆ. ಆದರೆ ಅದನ್ನು ಸ್ಥಾಪನೆ ಅಷ್ಟು ಎತ್ತರವಾಗಿ ಹೇಗೆ ಮಾಡಿದ್ದಾರೆ ಎನ್ನುವುದೇ ರಹಸ್ಯವಾಗಿದೆ.
- ಪುರಾಣಗಳ ಪ್ರಕಾರ ಈ ದೇವಾಲಯದ ರಕ್ಷಣೆ ಮಾಡುವ ಜವಾಬ್ದಾರಿ ಜಗನ್ನಾಥನು ಹನುಮಂತನಿಗೆ ನೀಡಿದ್ದಾರೆ ಎನ್ನುವುದು ಹೇಳಲಾಗಿದೆ. ಇದೆ ಕಾರಣಕ್ಕಾಗಿ ಹನುಮಂತನು ದೇವಾಲಯದ ಒಳಗೆ ಸಮುದ್ರದ ಶಬ್ದ ಬರದೇ ಇರುವ ಹಾಗೆ ತಡೆದಿದ್ದಾರೆ. ಜಗನ್ನಾಥನು ಯಾವುದೇ ಶಬ್ದಗಳಿಲ್ಲದೆ ಆರಾಮವಾಗಿ ಮಲಗಬಹುದು ಎನ್ನುವ ಕಾರಣಕ್ಕಾಗಿ.
- ಈ ದೇವಾಲಯದ ಮೇಲೆ ಯಾವುದೇ ಪಕ್ಷಿಗಳು ಹಾರಾಟ ನಡೆಸಲ್ಲ ಇಂದಿಗೂ. ಈ ಅಂಶದಿಂದ ಎಲ್ಲ ಭಕ್ತರು ಇಂದಿಗೂ ಆಶ್ಚರ್ಯಚಕಿತರಾಗಿದ್ದಾರೆ. ಹಾಗೇನೇ ಈ ದೇವಾಲಯದ ಮೇಲೆ ನೋ ಫ್ಲೈ ಜೋನ್ ಎಂದು ಕೂಡ ಮಾಡಲಾಗಿದೆ.
- ಮಳೆ ಬರಲಿ ಬಿಸಿಲಿರಲಿ ಪುರಿ ಜಗನ್ನಾಥ ದೇವಾಲಯದ ನೆರಳನ್ನು ಯಾರು ಇದುವರೆಗೂ ನೋಡಿಲ್ಲ.
- ಪುರಿ ಜಗನ್ನಾಥನ ಸನ್ನಿದಿಯಲ್ಲಿ ಪ್ರತಿ ದಿನ 2000 ದಿಂದ 20 ಸಾವಿರದವರೆಗೆ ಭಕ್ತರು ಪ್ರಸಾದ ಸೇವಿಸುತ್ತಾರೆ. ಅಮುನಿಯಾ ಎನ್ನುವ ವಿಶೇಷ ಅನ್ನವನ್ನು ಬೇಯಿಸಿ ಪ್ರಸಾದ ರೂಪದಲ್ಲಿ ನೀಡುತ್ತಾರೆ. ಯಾವುದೇ ಭಕ್ತರು ಇಲ್ಲಿಗೆ ಬಂದರು ಅವರಿಗೆ ಪ್ರಸಾದ ಸಿಗುತ್ತದೆ. ಇಲ್ಲ ಖಾಲಿಯಾಗಿದೆ ಎಂದು ಯಾವತ್ತು ಹೇಳಲಾಗುವುದಿಲ್ಲ.
- ಇನ್ನು ಇಲ್ಲಿನ ಅನ್ನ ಪ್ರಸಾದವನ್ನು 7 ಬಗೆಯ ಮಣ್ಣಿನ ಮಡಕೆಯಲ್ಲಿ ತಯಾರಿಸಲಾಗುತ್ತದೆ. ಇದನ್ನು ಒಂದರ ಮೇಲೊಂದು ಜೋಡಿಸಲಾಗುತ್ತದೆ. ಈ ಮೇಲಿನ ಮಡಕೆಯಲ್ಲಿರುವ ಅನ್ನ ಮೊದಲು ಬೇಯುತ್ತದೆ. ಇದು ಇಂದಿಗೂ ನಡೆಯುವ ವಿಸ್ಮಯಗಳಲ್ಲಿ ಒಂದಾಗಿದೆ.
Read This: Temple: ಈ ದೇವಸ್ಥಾನದಲ್ಲಿ ನಾಯಿಗಳಿಗಿದೆ ವಿಶೇಷ ಸ್ಥಾನಮಾನ! ಅಷ್ಟಕ್ಕೂ ಈ ದೇವಸ್ಥಾನ ಯಾವುದು? ಇಲ್ಲಿ ನಾಯಿಗಳು ಅಷ್ಟು ಪೂಜನೀಯ ಏಕೆ?