Politics

Stampede: ಸಿದ್ಧತೆಯಿಲ್ಲದ ಕಾರ್ಯಕ್ರಮ ಯಾಕೆ ಬೇಕಿತ್ತು – ಸರಕಾರದ ಬೇಜವಾಬ್ದಾರಿಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಕಿಡಿ.

18 ವರ್ಷಗಳ ಬಳಿಕ ಬೆಂಗಳೂರು ತಂಡ IPL 2025 ಕಪ್ ಗೆದ್ದಿದೆ. ಇದು ಬೆಂಗಳೂರು ಅಲ್ಲದೆ ದೇಶಾದ್ಯಂತ RCB ಅಭಿಮಾನಿಗಳಿಗೆ ಸಂತೋಷ ತರಿಸಿದೆ. ಇದಕ್ಕೆ ದೇಶದಾದ್ಯಂತ ಸಂಭ್ರಮಾಚರಣೆಯು ಜೋರಾಗಿತ್ತು. ಈ ಖುಷಿ ಸಂತೋಷ ಕೇವಲ 1 ದಿವಸಕ್ಕೆ ಸೀಮಿತವಾಗಿತ್ತು. ಬೆಂಗಳೂರಿನಲ್ಲಿ ಸಡಗರದ ಸಂಭ್ರಮಾಚರಣೆ ವೇಳೆ 11 ಮಂದಿ ಕಾಲ್ತುಳಿತಕ್ಕೆ (stampede)ಬಲಿಯಾಗಿದ್ದಾರೆ. ಇದಕ್ಕೆ ಹೊಣೆಯಾರು? ತರಾತುರಿಯಲ್ಲಿ ಈ ಸಂಭ್ರಮಾಚರಣೆ ಮಾಡಬೇಕಿತ್ತ ಎಂದು ಅನೇಕರು ದೇಶಾದ್ಯಂತ ಕೇಳುತ್ತಿದ್ದಾರೆ.

ಕಾಲ್ತುಳಿತಕ್ಕೆ (stampede) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಇದೊಂದು ಘೋರ ದುರಂತವಾಗಿದೆ. ಇದಕ್ಕೆ ಸರಕಾರ ನೇರವಾಗಿ ಹೊಣೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕಿಡಿ ಕಾರಿದ್ದಾರೆ. ಸರಕಾರದ ಭದ್ರತೆಯ ನಿರ್ಲಕ್ಷಕ್ಕೆ ಅಮಾಯಕ ಜೀವಗಳು ಪ್ರಾಣ ತೆತ್ತಿದೆ ಎಂದು ಹೇಳಿದ್ದಾರೆ. ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ತರಾತುರಿಯಲ್ಲಿ ಕೇವಲ ಪ್ರಚಾರದ ಉದ್ದೇಶದಿಂದ ಈ ಅವಘಡ ಸಂಭವಿಸಿದೆ. ಇದಕ್ಕೆ ಸರಕಾರ ನೇರ ಹೊಣೆ.

ರಾಜ್ಯದ ಗೃಹ ಸಚಿವರು, ಪೂರ್ತಿ ಇಲಾಖೆ ವಿಫಲವಾಗಿದೆ ಇದರಿಂದ ಇಲಾಖೆಯ ವೈಫಲ್ಯ ಮತ್ತೊಮ್ಮೆ ಬಹಿರಂಗವಾಗಿದೆ. ಇದನ್ನು ಸ್ವತಃ ಆಡಳಿತ ಪಕ್ಷದ ನಾಯಕರೆ ಆರೋಪಿಸುತ್ತಿದ್ದಾರೆ. ಮುಖ್ಯಮಂತ್ರಿ ಹಾಗು ಉಪಮುಖ್ಯಮಂತ್ರಿ ಭಾಗವಹಿಸಿದ ಕಾರ್ಯಕ್ರಮದಲ್ಲಿಯೇ ಇಂತಹ ಘಟನೆ ನಡೆದಿರುವುದು ನಾಚಿಕೆ ಕೇಡಿನ ಸಂಗತಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Admin

News junkie, love to write political, current affairs, financial literate and general knowledge content.

Leave a Reply

Your email address will not be published. Required fields are marked *