ಮೋದಿ ಸರಕಾರ ಹೊಸ ಆಧಾರ್ ಅಪ್ಲಿಕೇಶನ್ (Aadhaar App) ಅನ್ನು ಬಿಡುಗಡೆ ಮಾಡಿದೆ. ಇದರಿಂದ ಬಳಕೆದಾರರಿಗೆ ಆಧಾರ್ ಸಂಬಂದಿತ ಪರಿಶೀಲನೆಗೆ ಬೌತಿಕ ಆಧಾರ್ ಕಾಪಿ ಪ್ರತಿ ಅಗತ್ಯವಿರುವುದಿಲ್ಲ. ಇದರ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವ ಅಷ್ವಿನ್ ವೈಷ್ಣವ್ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
X ನಲ್ಲಿ ಬಿಡುಗಡೆಯಾದ ಈ ವಿಡಿಯೋ ಈ ಹೊಸ ಅಪ್ಲಿಕೇಶನ್ (Aadhaar App) ಮೂಲಕ ಫೇಸ್ ಐಡಿ ದೃಡೀಕರಣ ಸಾಧ್ಯವಾಗುತ್ತದೆ. ಬಳಕೆದಾರರ ಮಾಹಿತಿ ಅನ್ನು ಅವರ ಸಮ್ಮತಿ ಮೂಲಕ ಹಂಚಿಕೊಳ್ಳಲಾಗುತ್ತದೆ ಎಂದು ಈ ವಿಡಿಯೋ ತೋರಿಸುತ್ತದೆ. ಪ್ರಸ್ತುತವಾಗಿ ಈ ಅಪ್ಲಿಕೇಶನ್ ಪರೀಕ್ಷಣಾ ಹಂತದಲ್ಲಿದೆ. ಇದು ಆಧಾರ್ ಕಾರ್ಡ್ ಪರಿಶೀಲನೆ ಮಾಡುವ ಕೆಲಸ ಮಾಡುತ್ತದೆ. ಹಾಗೇನೇ ಇದು ಬಳಕೆದಾರರ ಗೌಪ್ಯತೆ ಹೆಚ್ಚಿಸುವ ಸಾಧನ ಕೂಡ ಆಗಿದೆ.
ಈ ಹೊಸ ಆಧಾರ್ ನ ವೈಶಿಷ್ಟ್ಯಗಳು ಏನೇನು?

- ಬಳಕೆದಾರರು ಅಗತ್ಯಕ್ಕೆ ತಕ್ಕ ಮಾಹಿತಿ ಮಾತ್ರ ಹಂಚಿಕೊಳ್ಳಬಹುದು. ಇದರಿಂದ ವಯಕ್ತಿಕ ಮಾಹಿತಿ ಸುರಕ್ಷಿತವಾಗಿರುತ್ತದೆ.
- UPI ಪೇಮೆಂಟ್ ಮಾದರಿಯಲ್ಲೇ ಇದು ಕೂಡ QR ಕೋಡ್ ಸ್ಕ್ಯಾನ್ ಮಾಡುವ ಹಾಗೆ ಆಧಾರ್ parishilane ಕೂಡ ನಡೆಯುತ್ತದೆ.
- ಈಗ ಆಧಾರ್ ಫೋಟೋ ಕಾಪಿ ಪ್ರತಿ ಸ್ಕ್ಯಾನ್ ಮಾಡಬೇಕೆಂದಿಲ್ಲ. ಎಲ್ಲವು ಈ ಅಪ್ಲಿಕೇಶನ್ ಮೂಲಕ ಸಿಗುತ್ತದೆ.
- ಮುಖಗುರುತಿಸುವಿಕೆ ಮೂಲಕ ಆಧಾರ್ ಕಾರ್ಡ್ ಪರಿಶೀಲನೆ ಮಾಡಲಾಗುತ್ತದೆ. ಇದರಿಂದ ಭದ್ರತೆ ಇನ್ನೂ ಹೆಚ್ಚಾಗುತ್ತದೆ.
- ಹೋಟೆಲ್, ಅಂಗಡಿ, ಅಥವಾ ಪ್ರಯಾಣ ಚೆಕ್ಪೋಸ್ಟ್ ಗಳಲ್ಲಿ ಇನ್ನು ಮುಂದೆ ಈ ಅಪ್ಲಿಕೇಶನ್ ಮೂಲಕ ಆಧಾರ್ ಪರಿಶೀಲನೆ ನಡೆಸಬಹುದು.
- ೧೦೦% ಡಿಜಿಟಲ್ ಇರಲಿದ್ದು ನಿಮ್ಮ ಗುರುತು ಸಂಪೂರ್ಣ ಗೌಪ್ಯವಾಗಿರಲಿದೆ.
- ಡಿಜಿಟಲೀಕರಣದಿಂದ ನಿಮ್ಮ ಆದಾರ್ ದುರುಪಯೋಗ ಹಾಗು ಸೋರಿಕೆ ಕೂಡಾ ಕಡಿಮೆಯಾಗಲಿದೆ.
- ಆದಾರ್ ತಿರುಚುವಿಕೆ ಹಾಗೂ ವಂಚನೆ ಇದರಿಂದ ಸಾಧ್ಯವಿಲ್ಲ.