File Your Income tax return Now!

Connect with us for filing your income tax and GST filing and all sorts of statutory requirement.

Your Attractive Heading

Call To Action

Connect with us for your income tax return and GST filing. The price starting from Just Rs. 500/

ಶಿವಾಜಿ ಮಹಾರಾಜ್ ಪುತ್ರನ ಬಗೆಗಿನ ಸಿನೆಮಾ Chhaava. ಇದನ್ನು ಪ್ರತಿಯೊಬ್ಬ ಭಾರತೀಯರು ಯಾಕೆ ನೋಡಬೇಕು? ಇಲ್ಲಿದೆ ಸಿನೆಮಾ ವಿಮರ್ಶೆ.

Chhaava: ನಿಜವಾಗಿಯೂ ಹೇಳಬೇಕೆಂದರೆ ಈ ಸಿನೆಮಾ ನೋಡಿದ ಮೇಲೆ ನನಗೆ ಕೈ ಕಾಲುಗಳೇ ಅಲುಗಾಡುತ್ತಿಲ್ಲ. ಈ ಸಿನೆಮಾ ವರ್ಣನೆ ಮಾಡಲು ಪದಗಳು ಕೂಡ ಇಲ್ಲ. ಇಂತಹ ಪರಿಸ್ಥಿಯಿತಿ ಬರುವುದು ಆ ಸಿನೆಮಾ ಸಿನೆಮಾ ಆಗಿರದೆ ಕಥೆ ಹಾಗು ನಟನೆ ನಮ್ಮ ಒಳಹೊಕ್ಕು ನಮ್ಮ ಇತಿಹಾಸದಲ್ಲಿ ನಮ್ಮ ಮೇಲೆ ದಾಳಿ ಮಾಡಿದವರು ನಮ್ಮನ್ನು ಇಷ್ಟು ಕ್ರೂರವಾಗಿ ನಡೆಸಿಕೊಂಡಿದ್ದಾರಾ ಎನ್ನುವುದು. ಆದರೂ ಈ ಸಿನೆಮಾದ ಬಗ್ಗೆ ನನ್ನ ಆಲೋಚನೆಗಳನ್ನು ಸ್ವಲ್ಪ ಹಂಚಿಕೊಳ್ಳುತ್ತಿದ್ದೇನೆ.

Chhaava ಸಿನೆಮಾ ನೋಡಿದ ನಂತರ ಕೈಕಾಲು ಅಲುಗಾಡುತ್ತಿಲ್ಲ ಹಾಗು ಮಾತು ಬರುತ್ತಿಲ್ಲ ಎಂದು ಹೇಳಿದ್ದೆ. ಅದು ಈ ಸಿನೆಮಾದ ಕೊನೆಯ ಘಟ್ಟದ ಕಥೆ ಹಾಗು ದೃಶ್ಯ ಅಂದರೆ ಕ್ಲೈಮಾಕ್ಸ್ ನೋಡಿ. ಇದೊಂದು ಅತ್ಯಂತ ನೋವಿನ ಕ್ಲೈಮಾಕ್ಸ್ ಎಂದರೆ ತಪ್ಪಾಗಲಾರದು. ಇನ್ನೊಂದು ವಿಷಯ ಏನೆಂದರೆ ಈ ಘಟನೆ ನಿಜಕ್ಕೂ ನಮ್ಮ ಭಾರತದ ಇತಿಹಾಸದಲ್ಲಿ ನಡೆದಿದೆ.

ಇನ್ನು ಸಿನೆಮಾ ಬಗ್ಗೆ ಮಾತಾಡುವುದಾದರೆ, ಇದು 2 ಗಂಟೆ 36 ನಿಮಿಷದಾಗಿದೆ. ಈ ಕಥೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧಾರಿತ ಸಿನೆಮಾ ಆಗಿದೆ. ಇದು Chatrapati Sambhaji Maharaj ಎನ್ನುವ ಕಾದಂಬರಿ ಇಂದ ಸಿನೆಮಾ ಮಾಡಲಾಗಿದೆ. ಈ ಕಾದಂಬರಿ ಬರೆದ ಲೇಖಕರು ಶಿವಾಜಿ ಸವಾಂತ್ (Shivaji Sawant).

ಮೊದಲರ್ಧ.

ಮೊದಲರ್ಧದಲ್ಲಿ ಈ ಸಿನೆಮಾ ಪಾತ್ರಗಳ ಪರಿಚಯ ನೀಡುತ್ತದೆ. ಇದು ನಮಗೆ ಮೊದಲೇ ಗೊತ್ತಿದ್ದರೂ ಕೂಡ ಕಥೆ ನಮ್ಮನ್ನು ಬೋರ್ ಆಗದಂತೆ ನೋಡಿಕೊಳ್ಳುತ್ತದೆ.

chhaava

ಕೊನೆಯರ್ಧ.

ಇನ್ನು ಎರಡನೆಯರ್ಧದಲ್ಲೂ ಕಥೆ ಸ್ವಾರಸ್ಯವಾಗಿ ನಡೆಯುತ್ತದೆ. ಇಲ್ಲಿ ವಿಷಯಗಳು ತೆರೆದುಕೊಳ್ಳಲು ಪ್ರಾರಂಭಿಸುತ್ತದೆ. ಕೊನೆಯ 45 ನಿಮಿಷಗಳು ರೋಮಾಂಚನಗೊಳಿಸುತ್ತದೆ. ಇನ್ನು ಈ ಸಿನೆಮಾದ ಮ್ಯೂಸಿಕ್ ನಿಮಗೆ ಕಥಾಹಂದರಕ್ಕೆ ಪೂರಕವಾಗಿದೆ. ಚಿತ್ರಕಥೆ ಅತ್ಯುತ್ತಮವಾಗಿದೆ. ಈ ಪಾತ್ರಕ್ಕೆ ವಿಕಿ ಕೌಶಲ್ (Vicky Kaushal) ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.

ಇನ್ನು ಅಭಿನಯ ವಿಷಯಕ್ಕೆ ಬಂದರೆ ವಿಕಿ ಕೌಶಲ್ ಅವರ ವೃತ್ತಿ ಜೀವನದ ಅತ್ಯುತ್ತಮ ನಟನೆಯಾಗಿದೆ. ಛತ್ರಪತಿ ಸಂಭಾಜಿಯೇ ಆಗಿದ್ದರು ಈ ಸಿನೆಮಾದಲ್ಲಿ. ಈ ಸಿನೆಮಾ ನೋಡುತ್ತಿದ್ದಾಗ ಸಿನೆಮಾ ಎನಿಸದೆ ನಾವು ಸಂಭಾಜಿಯನ್ನೇ ನೋಡುತ್ತಿದ್ದೇವೆ ಎನಿಸುತ್ತದೆ. ಅಷ್ಟು ಅದ್ಭುತವಾಗಿ ನಟಿಸಿದ್ದಾರೆ ನಟ.

ಈ ಸಿನೆಮಾ ಧೈರ್ಯ, ಗೌರವ, ರಾಷ್ಟ್ರೀಯತೆ, ದೃಢ ನಿಶ್ಚಯ, ಪ್ರೀತಿಯನ್ನು ಸಾರುತ್ತದೆ. ಇತಿಹಾಸ ಶಾಲೆಗಳಲ್ಲಿ ತಿಳಿಸಲಿಲ್ಲ. ಇದನ್ನು ಈ ಮೂಲಕ ನಾವು ತಿಳಿದುಕೊಳ್ಳುವ ಅವಕಾಶ ಬಂದೊದಗಿದೆ. ಮರಾಠ ಹಾಗು ಹಿಂದೂ ಸಾಮ್ರಾಜ್ಯದ ಸಿದ್ದಾಂತ, ಹಿಂದವೀ ಸಾಮ್ರಾಜ್ಯದ ಕಲ್ಪನೆ, ಶಿವಾಜಿ ಮಹಾರಾಜರ (Chatrapati Shivaji Maharaj) ಹಾಕಿಕೊಟ್ಟ ಹಿಂದವೀ ಕನಸನ್ನು ಮುನ್ನಡೆಸುವ ಮಗನ ಛಲದ ಬಗ್ಗೆ ಸಾರುತ್ತದೆ ಈ ಸಿನೆಮಾ. ದಯವಿಟ್ಟು ಈ ಸಿನೆಮಾ ನೋಡುವುದನ್ನು ಮರೆಯಬೇಡಿ. ಈ ಸಿನೆಮಾ ಮಾಡಿದ Maddock Films ಗೆ ನಿಜವಾಗಲೂ ವಂದನೆ ಸಲ್ಲಿಸಬೇಕು.

Leave a Comment

Your email address will not be published. Required fields are marked *

Scroll to Top