Bigboss Season 11: ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ದಿಗಳನ್ನು ಹೊರಗಡೆ ಕಳಿಸಿದ ಬಿಗ್ ಬಾಸ್? ಅಷ್ಟಕ್ಕೂ ಕೋಪಗೊಂಡ ಬಿಗ್ ಬಾಸ್ ಹೇಳಿದ್ದೇನು?

ಈ ಬಾರಿಯ ಬಿಗ್ ಬಾಸ್ ಮಾತ್ರ ಎಲ್ಲಾ ಕಡೆ ಬಹಳಷ್ಟು ಚರ್ಚೆಯನ್ನು ಹುಟ್ಟಿ ಹಾಕಿದೆ ಪ್ರತಿ ದಿನ ಟಿವಿ ಮುಂದೆ ಕೂತರೆ ಬರಿ ಜಗಳ ಮಾತ್ರ ನೋಡಲು ಸಿಗುತ್ತಾ ಇದೆ. (Lawyer jagadish)ಲಾಯರ್ ಜಗದೀಶ್ ಮಾತ್ರ ಸದಾ ಒಂದಿಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಮೊದಲ ದಿನದಿಂದಲೂ ಬಿಗ್ ಬಾಸ್ ಅನ್ನು ಎದುರು ಹಾಕಿಕೊಂಡು ಈ ವ್ಯಕ್ತಿ ಮನೆಯ ಎಲ್ಲರ ಜೊತೆ ಜಗಳವಾಡುತ್ತಾ ಇರೋದನ್ನ ನಾವು ನೋಡಿದ್ದೇವೆ. ಬಿಗ್ ಬಾಸ್ ಇತಿಹಾಸದಲ್ಲಿ ಬಿಗ್ ಬಾಸ್ ವಿರುದ್ಧ ಹಾಗೆ ಮಾತನಾಡಿದ ವ್ಯಕ್ತಿ ಇದ್ದರೆ ಅದು ಜಗದೀಶ್ ಮಾತ್ರ. ಬಿಗ್ ಬಾಸ್ ವಿರುದ್ಧವೇ ಚಾಲೆಂಜ್ ಹಾಕಿರುವ ಲಾಯರ್ ಜಗದೀಶ್ ಮತ್ತೆ ಸುದ್ದಿಯಲ್ಲಿದ್ದಾರೆ.

ನಿನ್ನೆ ತಾನೆ ಚೈತ್ರ ಕುಂದಾಪುರ( chaithra kundapur)ಜೊತೆ ಗಲಾಟೆ ಮಾಡಿಕೊಂಡಿರುವ ಜಗದೀಶ್ ಇದೀಗ ಹೊಸದಾಗಿ ಬಂದ ಪ್ರಮೋದಲ್ಲಿ ರಂಜಿತ್(Ranjith) ಅವರ ಜೊತೆಗೆ ಗಲಾಟೆ ಮಾಡುತ್ತಿರುವುದನ್ನು ಕಾಣಬಹುದು. ಈಗಲಾಟ ಕೇವಲ ಗಲಾಟೆ ಆಗಿ ಉಳಿಯದೆ ಮೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇದರಿಂದಾಗಿ ಕೋಪಗೊಂಡು ಬಿಗ್ ಬಾಸ್ ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಜೋರಾಗಿ ಮಾತಾಡಿದ್ದನ್ನು ಗಮನಿಸಬಹುದು. ಇಲ್ಲಿ ಮೆಲುದನೆಯಲ್ಲಿ ಮಾತಾಡುತ್ತಿರುವ ಬಿಗ್ ಬಾಸ್ ಎಲ್ಲರಿಗೂ ಬಂದು ಸುಮ್ಮನೆ ಕೂತುಕೊಳ್ಳುವಂತೆ ಜೋರು ಮಾಡುತ್ತಿರುವುದನ್ನು ಕಾಣಬಹುದು.

ಅದೇ ಸಮಯದಲ್ಲಿ ಫೋನ್ ಕೂಡ ರಿಂಗ್ ಆಗುತ್ತಿರುವುದನ್ನು ಕಾಣಬಹುದು. ಈಗ ಮೂಲಗಳ ಪ್ರಕಾರ ಜಗದೀಶ್ ಮತ್ತು ರಂಜಿತ್ ಅವರು ಬಿಗ್ ಬಾಸ್ ಆಟದ ಮೂಲ ನಿಯಮವನ್ನು ಮರೆತಿದ್ದಾರೆ. ನಿಯಮಗಳ ಪ್ರಕಾರ ಯಾರೇ ವ್ಯಕ್ತಿಯಾಗಲಿ ಗಲಾಟೆ ಮಾಡಿಕೊಂಡಲ್ಲಿ ನೇರವಾಗಿ ಅವರನ್ನು ಹೊರ ಹಾಕಲಾಗುವುದು. ಈ ಹಿಂದೆ ಹುಚ್ಚ ವೆಂಕಟ್ ಅವರನ್ನು ಹೊರ ಹಾಕಿದ್ದನ್ನು ನಾವು ನೋಡಿದ್ದೇವೆ. ಈಗ ಮಾಹಿತಿಗಳ ಪ್ರಕಾರ ಲಾಯರ್ ಜಗದೀಶ್ ಅವರು ಮತ್ತು ರಂಜಿತ್ ಇಬ್ಬರನ್ನು ಕೂಡ ಮನೆಯಿಂದ ಹೊರಹಾಕಲಾಗಿದೆ. ಇನ್ನು ಕೆಲವರು ಹೇಳುವಂತೆ ಕೇವಲ ನಾಯರ್ ಜಗದೀಶ್ ಅವರನ್ನು ಮಾತ್ರ ಅವರನ್ನು ಮಾತ್ರ ಹಾಕಲಾಗಿದೆ. ಇಂದಿನ ಎಪಿಸೋಡ್ ವರೆಗೂ ಕಾದು ನೋಡಬೇಕಾಗಿದೆ.

BigbossChaitra kundapurEliminatedFight
Comments (0)
Add Comment