Politics

Siddaramaiah: ಪಾಕಿಸ್ತಾನ ಮಾದ್ಯಮದಲ್ಲಿ ಸುದ್ದಿಯಾದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ.

Siddaramaiah: ಪಹಾಲ್ಗಮ್ ನಲ್ಲಿ ಹಿಂದೂಗಳ ಮೇಲೆ ಉಗ್ರರ ದಾಳಿ ನಂತರ ಭಾರತ ಹಾಗು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಇದೀಗ ದೇಶದೆಲ್ಲೆಡೆ ಪ್ರತಿಕಾರ ದ ಭಾವನೆ ಇದ್ದೆ. ಪ್ರಧಾನಿ ಮೋದಿ ದೇಶವಾಸಿಗಳಿಗೆ ಉಗ್ರರ ವಿರುದ್ಧ ಕಠಿಣ ಕ್ರಮ ದ ಬಗ್ಗೆ ಮಾತು ನೀಡಿದ್ದಾರೆ. ಇದಕ್ಕೆ ಸಾಕ್ಷಿಯಂತೆ ಪಾಕಿಸ್ತಾನದಲ್ಲಿ ಹೆದರಿಕೆ ಶುರುವಾಗಿದೆ. ಭಾರತ ಪಾಕಿಸ್ತಾನದ ಗಡಿಯಲ್ಲಿ ಯುದ್ಧ ಟ್ಯಾಂಕರ್ ಗಳು ಲೈನ್ ಆಗಿ ನಿಂತಿವೆ.

ಇದೆಲ್ಲ ಆಗುವಾಗ ಭಾರತ ಹಾಗು ಪಾಕಿಸ್ತಾನದಲ್ಲಿ ಯಾವುದೇ ಸಣ್ಣ ಪುಟ್ಟ ಹೇಳಿಕೆಗಳಿರಲಿ ದೊಡ್ಡ ಸುದ್ದಿಯಾಗುತ್ತದೆ. ಯುದ್ಧದ ಭೀತಿಯಲ್ಲಿ ಇದೆಲ್ಲ ಸಾಮಾನ್ಯ. ಆದಾಗ್ಯೂ ಪಾಕಿಸ್ತಾನ ಅನೇಕ ಬಾರಿ ಉಗ್ರ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿರುವ ಸಮಯದಲ್ಲಿ, ಇದೀಗ ನಿರಾಯುಧ ಪ್ರವಾಸಿಗರ ಮೇಲೆ ಧರ್ಮದ ಆಧಾರದಲ್ಲಿ ದಾಳಿ ನಡೆದಿರುವುದು ಖಂಡನೀಯ. ದೇಶದೆಲ್ಲೆಡೆ ಪ್ರತಿಕಾರ ಭಾವನೆ ಇರುವಾಗ ಮೋದಿ ಸರ್ವ ಪಕ್ಷಗಳ ಸಭೆ ಕರೆದು ಎಲ್ಲರನ್ನು ವಿಶ್ವಾಸಕ್ಕೆ ತಗೊಂಡಿದ್ದರು. ಇವಾಗ ಕರ್ನಾಟಕ ಮುಖ್ಯಮಂತ್ರಿ (Siddaramaiah) ಹೇಳಿಕೆ ಭಾರತದಲ್ಲಿ ಅಲ್ಲದೆ ಪಾಕಿಸ್ತಾನದಲ್ಲೂ ಸುದ್ದಿಯಾಗಿದೆ.

ಪಹಾಲ್ಗಮ್ ನಲ್ಲಿ ನಡೆದ ದುರಂತ ದ ನಂತರ ಮೈಸೂರ್ ನಲ್ಲಿ ಸಿದ್ದರಾಮಯ್ಯ (Siddaramaiah) ಅವರು ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಅಗತ್ಯ ಇಲ್ಲ ಎಂದು ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಹಿಂದೆ ಪುಲ್ವಾಮಾ ದಾಳಿಯಲ್ಲೂ ದುರಂತ ಸಂಭವಿಸಿತ್ತು. ಕೇಂದ್ರ ಸರಕಾರದ ಭದ್ರತಾ ವೈಫಲ್ಯವೇ ಇದಕೆಲ್ಲ ಕಾರಣ . ಇನ್ನು ಯಾವುದೇ ಕ್ರಮ ತಗೊಂಡರು ಕೂಡ ಹೋದ 26 ಜೀವ ವಾಪಸ್ಸು ಬರುವುದಿಲ್ಲ ಎಂದು ಹೇಳಿದ್ದಾರೆ.

Read this also: Aadhaar App: ಬಂದಿದೆ ಹೊಸ ಆಧಾರ್ ಆಫ್, ಇನ್ನು ಮುಂದೆ ಎಲ್ಲ ಸರಕಾರಿ, ಖಾಸಗಿ ಕೆಲಸಗಳಿಗೆ ಆಧಾರ್ ಕಾರ್ಡ್ ನೀಡುವ ಗೋಜಿಲ್ಲ. ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಮಾಹಿತಿ.

ಇದೀಗ ಇದೆ ಪತ್ರಿಕಾ ಹೇಳಿಕೆ ಪಾಕಿಸ್ತಾನದಲ್ಲಿ ಬ್ರೇಕಿಂಗ್ ನ್ಯೂಸ್ ನಲ್ಲಿ ಹಾಕುತ್ತಿದ್ದಾರೆ. ಯುದ್ಧದ ಭೀತಿಯಲ್ಲಿರುವ ಈ ಸಮಯದಲ್ಲಿ ಇಂತಹ ಹೇಳಿಕೆ ಕೊಟ್ಟಿರುವುದು ಎಲ್ಲರಲ್ಲೂ ಆಕ್ರೋಶ ಕ್ಕೆ ಕಾರಣವಾಗಿದೆ. ಇದಕ್ಕೆ ವಿರೋಧ ಪಕ್ಷ ನಾಯಕ ಆರ್ ಅಶೋಕ್ ಟ್ವೀಟ್ ಮಾಡುತ್ತ ಸಿದ್ದರಾಮಯ್ಯ ಅವರನ್ನು ಪಾಕಿಸ್ತಾನ ರತ್ನ ಎಂದು ಕರೆದಿದ್ದಾರೆ.

Admin

News junkie, love to write political, current affairs, financial literate and general knowledge content.

Leave a Reply

Your email address will not be published. Required fields are marked *