ಡಿ ಬಾಸ್ ಅಭಿಮಾನಿ ಸುಧಾಕರ್ ವಿರುದ್ಧ ಪ್ರಕರಣ! ಅಷ್ಟಕ್ಕೂ ಮಾರ್ಟೀನ್ ಚಿತ್ರಕ್ಕೆ ಕೊಟ್ಟ ರಿವ್ಯೂ ಕಂಟಕವಾಯಿತೇ? ಇಲ್ಲ ಡಿ ಬಾಸ್ ಅಭಿಮಾನಿಗಳ ಹತ್ತಿಕ್ಕುವ ಹುನ್ನಾರವೇ?
ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಮಾರ್ಟಿನ್ ಚಿತ್ರ ಇದೀಗ ತೆರೆಗೆ ಬಂದಿದ್ದು, ಪ್ರೇಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಈ ಚಿತ್ರ ಶುಕ್ರವಾರ ತೆರೆ ಮೇಲೆ ಬಂದಿತು. ಇದನ್ನು ಪ್ಯಾನ್ ಇಂಡಿಯಾ ಚಿತ್ರವಾಗಿ ಮಾಡಿದ್ದು, ಇತರ ಭಾಷೆಗಳನ್ನು ಕೂಡ ಚಿತ್ರ ತೆರೆ ಕಂಡಿದೆ. ಆದರೆ ಹೆಚ್ಚಿನ ಪ್ರೇಕ್ಷಕರು ಈ ಮಾರ್ಟಿನ್ ಚಿತ್ರದ ವಿರುದ್ಧವಾಗಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಕಥೆ ಬಹಳ ಸರಳವಾಗಿತ್ತು ಇದು ಪ್ಯಾನ್ ಇಂಡಿಯ ಮೂವಿ ಕಥೆ ಅಲ್ಲ ಎನ್ನುತ್ತಿದ್ದಾರೆ.
ಇದೀಗ ನಿನ್ನೆಯ ದಿನ ಯೂಟ್ಯೂಬ್ ಸ್ಟಾರ್ಸ್ ಸುಧಾಕರ್ ಅವರು ಈ ಸಿನಿಮಾದ ಬಗ್ಗೆ ಕೊಟ್ಟಿದ್ದಂತಹ ರಿವ್ಯೂ ಬಹಳ ವೈರಲಾಗಿದೆ. ಕೊರತಮ್ಮ ರಿವ್ಯೂನಲ್ಲಿ ಸಿನಿಮಾದ ಕಥೆ ಬಹಳ ಸರಳವಾಗಿದ್ದು ಇದು ಪ್ಲಾನ್ ಇಂಡಿಯಾ ಮೂವಿ ಮಾಡಲು ಲಾಯಕ್ಕಿಲ್ಲದ ಕಥೆ. ನಾಯಕ ನಟ ದ್ರುವ ಸರ್ಜನನ್ನು ಕೊಡುವ ವೈಭವಿಕರಿಸಲಾಗಿದೆ. ಸಿನಿಮಾದ ನಿರ್ದೇಶನ ಕಥೆ ಮತ್ತು ಮೇಕಿಂಗ್ ಸಣ್ಣ ಮಕ್ಕಳು ಸಿನೆಮಾ ಮಾಡಿದಂತಿದೆ. ಸಿನಿಮಾದಲ್ಲಿ ಗ್ರಾಫಿಕ್ಸ್ ಕೂಡ ಬಹಳ ಕೆಟ್ಟದಾಗಿ ಮಾಡಲಾಗಿದೆ, ಅದಕ್ಕಿಂತ pubg ಗೇಮ್ ನಲ್ಲಿರೋ ಗ್ರಾಫಿಕ್ಸ್ ತುಂಬಾ ಚೆನ್ನಾಗಿದೆ ಎಂದಿದ್ದಾರೆ.
ಈ ರಿವ್ಯೂ ನಂತರ ಈ ಒಂದು ವಿಡಿಯೋ ಬಹಳಷ್ಟು ವೈರಲ್ ಆಗಿದ್ದು,ಧ್ರುವ ಸರ್ಜಾ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಸುಧಾಕರ್ ವಿರುದ್ಧ ಕೇಸನ್ನು ಕೂಡ ದಾಖಲಿಸಿದ್ದಾರೆ.ದೂರಿನಲ್ಲಿ ಹೇಳುವ ಪ್ರಕಾರ ಇವರು ಹಣ ಪಡೆದು ರಿವ್ಯೂ ನೀಡಿದ್ದಾರೆ. ಅವರನ್ನು ಬಂಧಿಸಿದ ಪೊಲೀಸರು ತಪ್ಪನ್ನು ಒಪ್ಪಿಕೊಂಡ ನಂತರ ಮುಚ್ಚಳಿಕೆ ಬರೆಸಿ ಬಿಡುಗಡೆ ಮಾಡಿದ್ದಾರೆ. ಸುಧಾಕರ ಅವರು ಅಪ್ಪಟ ಡಿ ಬಾಸ್ ಅಭಿಮಾನಿಯಾಗಿದ್ದು, ಡಿ ಬಾಸ್ ಅವರ ಅಭಿಮಾನಿಗಳನ್ನು ತೊಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಡಿ ಬಾಸ್ ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ. ಈಗ ಚಂದನವನದಲ್ಲಿ ಫ್ಯಾನ್ ವಾರ್ ಶುರುವಾಗಿದೆ. ಒಂದೆಡೆ ಕನ್ನಡ ಸಿನಿಮಾಗಳು ಬೆಳೆಯಲಿ ಸಪೋರ್ಟ್ ಮಾಡಿ ಎಂದು ಹೇಳುವ ಜನರಿದ್ದರೆ, ಇನ್ನೊಂದೆಡೆ ಇಂತಹ ಸಿನಿಮಾ ಮಾಡಿ ಕನ್ನಡದ ಮರ್ಯಾದೆ ತೆಗೆಯಬೇಡಿ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ಬಾಸ್ ಮತ್ತು ಧ್ರುವ ಸರ್ಜಾ ಅಭಿಮಾನಿಗಳು ನೀವೇ ಈಗ ಇದಕ್ಕೆ ಉತ್ತರ ನೀಡಬೇಕಾಗಿದೆ.