ಕಲ್ಪತರು ನಾಡು ತುಮಕೂರು ಹೆಸರು ದೇಶವ್ಯಾಪಿ ಹೆಸರುವಾಸಿಯಾಗಿದೆ ಈ ಒಬ್ಬ ರೈತನಿಂದ. ಅಷ್ಟಕ್ಕೂ ಈ ವ್ಯಕ್ತಿ ಮಾಡಿದ್ದಾದರೂ ಏನು?
ಕಲ್ಪತರು ನಾಡು ಎಂದೇ ಹೆಸರುವಾಸಿಯಾಗಿರುವ ತುಮಕೂರಿನ ರೈತ ತನ್ನ ಜಿಲ್ಲೆ ಹಾಗು ನಮ್ಮ ರಾಜ್ಯದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯದಿದ್ದಾರೆ. ಪ್ರತಿ ವರ್ಷ ರೈತರು ಬೆಳೆ ಇಲ್ಲದೆ ಕಂಗಾಲಾಗಿರುವ ಈ ಸಂಧರ್ಭದಲ್ಲಿ ತುಮಕೂರುನ ಲಕ್ಶ್ಮಣ ಎನ್ನುವ ರೈತರೊಬ್ಬರು ಭರ್ಜರಿ ಬೆಳೆ ಬೆಳೆಯುವ ಮೂಲಕ ರಾಷ್ಟೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ತುಮಕೂರಿನ ಲಕ್ಷ್ಮಣ ಅನ್ನುವ ರೈತ ಮಾಡಿದ್ದಾದರೂ ಏನು ಅಂತೀರಾ? ಇಲ್ಲಿದೆ ನೋಡಿ ರೈತನ ಸಾಧನೆ.
![](http://online24po.com/wp-content/uploads/2021/07/farmer.jpg)
ಲಕ್ಷ್ಮಣ ಎನ್ನುವ ಹಿರಿಯ ರೈತರು ಬೆಳೆದ ಹುಣಸೆ ಮರ ಇಡೀ ಭಾರತ ದೇಶದಲ್ಲಿಯೇ ವಿಶಿಷ್ಟ ಎಂದು ಹೆಸರುವಾಸುಯಾಗಿದೆ. ಪ್ರತಿ ವರ್ಷ ಗಣನೀಯವಾಗಿ ಹುಳಿ ಫಸಲು ಹೆಚ್ಚಾಗಿರುವ ಅಂಶ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಇದೀಗ ಈ ಹುಣಸೆ ಮರದ ತಳಿಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ತುಮಕೂರಿನ ರೈತ ಲಕ್ಷ್ಮಣ ಅವರ ಹೆಸರನ್ನೇ ಇಟ್ಟು ಅವರಿಗೆ ಗೌರವ ಸಲ್ಲಿಸಿದೆ. ೬೦ವರ್ಷದ ರೈತರಾದ ಲಕ್ಷ್ಮಣ ಅವರು ಒಟ್ಟಾರೆ ೧.೫ ಎಕರೆ ಭೂಮಿ ಹೊಂದಿದ್ದಾರೆ. ಈ ಭೂಮಿಯಲ್ಲೂ ಒಟ್ಟು ೩೦ ಹುಣಸೆ ಮರಗಳನ್ನು ಬೆಳೆದಿದ್ದಾರೆ. ೪೦ ವರ್ಷಗಳ ಹಿಂದೇನೆ ೪ ಒಳ್ಳೆ ಹುಣಸೆ ಸಸಿಗಳನ್ನು ತಂದು ತಮ್ಮ ತೋಟದಲ್ಲಿ ನೆಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ೪ ಮರಗಳ ಪೈಕಿ ೨ ಮಾತ್ರ ಜೀವ ಪಡೆದವು ಅದರಲ್ಲಿ ಒಂದು ಇಡೀ ಭಾರತದ ಗಮನ ಸೆಳೆದಿದೆ. ಲಕ್ಷ್ಮಣ ಅವರ ಮಗ ಹೆಂಡತಿ ಅವರು ಕೂಡ ಈ ಹುಣಸೆ ಬೆಳೆಯುವಲ್ಲಿ ಸಹಕಾರ ನೀಡಿದ್ದಾರೆ ಎಂದು ಲಕ್ಷ್ಮಣ್ ಅವರು ಹೇಳಿದ್ದಾರೆ.ತೋಟಗಾರಿಕಾ ಸಂಶೋಧನೆ ಸಂಸ್ಥೆ ಈ ರೈತರ ಜೊತೆ ಒಪ್ಪಂದ ಮಾಡಿಕೊಂಡು ಕಸಿ ಮೂಲಕ ಬೆಳೆಸಿದ ಸಸಿಗಳ ಮಾರಾಟದಿಂದ ಬರುವ ೪೦% ಲಾಭವನ್ನು ಈ ರೈತನಿಗೆ ನೀಡುವುದಾಗಿ ಹೇಳಿದ್ದಾರೆ. ಏನೇ ಆಗಲಿ ಇಂತಹ ಮಾದರಿ ರೈತರು ಇನ್ನು ಕರ್ನಾಟಕದಲ್ಲಿ ಸಿಗಲಿ ಹಾಗೇನೇ ಸರಕಾರದಿಂದ ಇಂತಹ ರೈತರಿಗೆ ಇನ್ನಷ್ಟು ಪ್ರೋತ್ಸಾಹ ಸಿಗಲಿ ಎನ್ನುವುದು ನಮ್ಮ ಆಶಯ.