ಈ ಒಂದು ಜೀವಿಗಳು ಭೂಮಿಯ ಮೇಲೆ ಇಲ್ಲದಿದ್ದರೆ ಇಡೀ ಮನು ಸಂಕುಲವೇ ಇಲ್ಲವಾಗುತ್ತದೆ? ಯಾವುದು ಆ ಜೀವಿ ಏನು ಅದರ ಮಹತ್ವ?
ಹೌದು ಈ ಜಗತ್ತು ಇರುವುದೇ ಸರಪಳಿ ನಿಯಮದಿಂದಾಗಿ. ಒಂದು ಜೀವ ಮತ್ತೊಂದು ಜೀವದ ಬದುಕಿನ ಆಧಾರ. ಹಾಗೆ ಮಾನವ ಬದುಕಲು ಇಂತಹದೇ ಜೀವಿಗಳು ಸಹಕಾರ. ಆದರೆ ಮಾನವ ಸಂಕುಲದ ಉಳಿವಿಗೆ ಈ ಜೀವಿಗಳು ಅತೀ ಪ್ರಾಮುಖ್ಯ ಎಂದು ಇತ್ತೀಚೆಗೆ ಘೋಷಿಸಲಾಗಿದೆ. ಹೌದು ಹಾಗಾದರೆ ಯಾವುದು ಆ ಜೀವಿ ಬನ್ನಿ ಮುಂದಕ್ಕೆ ತಿಳಿಯೋಣ. ಜೇನು ನೊಣಗಳು, ಹೌದು ಇದು ಆಶ್ಚರ್ಯ ಆದರೂ ಸತ್ಯ ಸಂಗತಿ. ಮಾನವ ಸಂತತಿ ಉಳಿವಿಗೆ ಜೇನು ನೊಣಗಳು ಇರಲೇ ಬೇಕು. ಎಂದಿಗೆ ಜೇನು ನೊಣಗಳ ಸಂತತಿ ಕಡಿಮೆ ಆಗುತ್ತದೋ ಆ ದಿನ ಮಾನವ ಸಂಕುಲ ಇರುವುದಿಲ್ಲ. ಹಾಗಾದರೆ ಇದಕ್ಕೆ ಕಾರಣ ಏನಿರಬಹುದು. ? ಬನ್ನಿ ತಿಳಿಯೋಣ.
“ಕ್ರಾಸ್ ಪೋಲಿನೇಷನ್” ಹೌದು ಪರಾಗಸ್ಪರ್ಶ ಕ್ರಿಯೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಒಂದು ಸಸ್ಯ ಗಿಡ ಮರವಾಗಲಿ ಪರಸ್ಪರ ಬಳಿಗೆ ಹೋಗಿ ತಮ್ಮ ಸಂತತಿ ಬೆಳೆಸುವುದಿಲ್ಲ. ಬದಲಾಗಿ ಈ ಜೇನು ನೊಣಗಳ ಸಹಾಯದಿಂದ ಅದರ ಸಂತತಿ ಬೆಳೆಯುತ್ತದೆ. ಜೇನು ನೊಣಗಳು ಗಂಡು ಮರದ ಹೂವಿನ ಮೇಲೆ ಕೂತು ಹೆಣ್ಣು ಮರದ ಹೂವಿನ ಮೇಲೆ ಕೂತಾಗ ಪರಾಗಸ್ಪರ್ಶ ಉಂಟಾಗಿ ಕಾಯಿ ಕಣ್ಣಿನ ಉತ್ಪತ್ತಿ ಆಗುತ್ತದೆ. ಈ ಜಗತ್ತಿನ 70% ಫಲಗಳು ಈ ಜೇನು ನೋಣಗಳಿಂದ ಉತ್ಪತ್ತಿ ಆಗುತ್ತದೆ.
ಹಾಗಾದರೆ ಈ ಜೇನು ನೊಣಗಳು ಇಲ್ಲದೆ ಯಾವುದೇ ಹಣ್ಣು ಹಂಪಲು ತರಕಾರಿ ಬೆಳೆಗಳು ಬಾರದಿದ್ದರೆ ಯಾವ ರೀತಿಯಲ್ಲಿ ಇರಬಹುದು ಈ ಜನರ ದಿನಚರಿ ಊಹಿಸಲು ಅಸಾಧ್ಯ ಆದ್ದರಿಂದ ಜೇನು ನೊಣಗಳ ಸಂತತಿ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ ನೀವು ಓದಿದ ನಂತರ ಇತರರು ಕೂಡ ಇತರ ಪ್ರಾಣಿಗಳ ಮಹತ್ವ ಜನರಿಗೆ ತಿಳಿಯಲಿ ಶೇರ್ ಮಾಡಿ ಜ್ಞಾನವನ್ನು ಹಂಚಿ.