ಈ ರೈತನ ಮಗಳು UPSC ಪರೀಕ್ಷೆ ಬರೆದು 23ನೇ ರಾಂಕ್ ಪಡೆದು IAS ಅಧಿಕಾರಿ ಆಗಿದ್ದಾರೆ?
ಸಾಧನೆ ಮತ್ತು ಪರಿಶ್ರಮ ಒಂದಿದ್ದರೆ ಯಾವುದೇ ರೀತಿಯ ಬಡತನ ನೆಪವಾಗುವುದಿಲ್ಲ. ಹೌದು ಏನಾದರೂ ಮಾಡಬೇಕು ಎನ್ನುವ ಛಲ ಒಂದು ನಿಮ್ಮನ್ನು ಎಷ್ಟು ಎತ್ತರಕ್ಕೆ ಬೇಕಾದರೂ ಏರಿಸುತ್ತದೆ. ಜೀವನದಲ್ಲಿ ಎಲ್ಲರಿಗೂ ಒಂದು ಏನಾದರೂ ಸಾಧಿಸಬೇಕು ಎಂದಿರುತ್ತದೆ ಅಂತಹುದೇ ಛಲ ಹೊತ್ತು ಹೋರಾಟ ಹುಡುಗಿ ಮಧ್ಯ ಪ್ರದೇಶದ ತಪಸ್ಯ ಎನ್ನುವವರು.
ಜೀವನದಲ್ಲಿ UPSC ಪರೀಕ್ಷೆ ಬರೆದು ಐಎಎಸ್ ಐಪಿಎಸ್ ಆಗಬೇಕು ಎಂದು ಅದೆಷ್ಟೋ ಲಕ್ಷಾಂತರ ಯುವ ಜನತೆ ಕನಸು ಕಾಣುತ್ತದೆ. ಅಷ್ಟೇ ಪೈಪೋಟಿ ಇರುವ ಈ ಪರೀಕ್ಷೆ ದೇಶದಲ್ಲಿ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಹೌದು ಇಂತಹ ಪರೀಕ್ಷೆಗೆ ತಯಾರಿ ನಡೆಸಿದ್ದು ರೈತನ ಮಗಳು ತಪಸ್ಯ. ಮನೆಯಲ್ಲಿನ ಕಷ್ಟಗಳು ಆಕೆಗೆ ಎಂದು ತೊಡಕು ಎಂದು ಭಾವಿಸಿಲ್ಲ. ಇತ್ತ ಹೆಜ್ಜೆಯ ಹಿಂದಿಡದೆ ಗಟ್ಟಿ ಮನಸಿನ ನಿರ್ಧಾರದಿಂದ ಮಾಡಿದ ಪ್ರಯತ್ನದ ಫಲ ಎಂಬಂತೆ ಆಕೆ UPSC ಪರೀಕ್ಷೆ ತೇರ್ಗಡೆ ಮಾಡಿದಳು.
Questioning traditions & rituals needs a strong determination!
— Bureaucrats India (@BureaucratsInd) December 22, 2021
2018 batch IAS officer Tapasya Parihar of Madhya Pradesh cadre stopped commodification of women by saying no to ritual of 'Kanyadaan' during her wedding to IFS Garvit Gangwar.
Read story: https://t.co/nusTcChk7Y pic.twitter.com/pKWXan6iHS
ಹೌದು UPSC ಪಾಸ್ ಆಗುವುದು ಅಷ್ಟು ಸುಲಭದ ಮಾತಲ್ಲ ಅಷ್ಟೇ ಶ್ರದ್ಧೆ ನಿಷ್ಠೆಯಿಂದ ಓದಿದಾಗ ಮಾತ್ರ ಅದನ್ನು ಸಾಧಿಸಬಹುದು. ಹಾಗೆಯೇ ತಪಸ್ಯ ಕೂಡ. ಈಕೆ UPSC ಪಾಸ್ ಮಾತ್ರ ಅಲ್ಲದೆ ಅಖಿಲ ಭಾರತ ಮಟ್ಟದಲ್ಲಿ 23 ನೇ ರಾಂಕ್ ಪಡೆದಿದ್ದಾರೆ. ಅದೇನೇ ಆಗಲಿ ಆಕೆಯ ಮುಂದಿನ ಎಲ್ಲಾ ಕನಸುಗಳು ಈಡೇರಲಿ . ಜನಗಳ ಸೇವೆ ಮಾಡುವ ಶಕ್ತಿ ದೇವರು ಅನುಗ್ರಹಿಸಲಿ ಎಂದು ಹಾರೈಸೋಣ.