ನನ್ನ ದೇಶ ಶ್ರೇಷ್ಠವಾಗಬಹುದು ಎಂದು ಭಾರತವನ್ನು ಪ್ರಶ್ನೆ ಮಾಡಿದ ಇರ್ಫಾನ್ ಪಠಾಣ್. ಇದಕ್ಕೆ ಖಡಕ್ ಆಗಿ ಉತ್ತರಿಸಿದ ಅಮಿತ್ ಮಿಶ್ರ. ನೆಟ್ಟಿಗರಿಂದ ಪ್ರಶಂಸೆ.
ಭಾರತ ಒಂದು ಜಾತ್ಯತೀತ ದೇಶ ಎಂದು ಸಂವಿದಾನದಲ್ಲಿ ಬೇಕಂತಲೇ ಇಂದಿ-ರಾ ಗಾಂ-ಧಿ ಹಾಕಿದರೂ ಕೂಡ ಭಾರತೀಯರು ಅಂದರೆ ಹಿಂದೂಗಳು ಸುಮ್ಮನಿದ್ದರು. ಯಾವುದೇ ಗಲಾಟೆ ಗೌಜಿಗೆ ಹೋಗಲಿಲ್ಲ. ನಾವುಗಳು ಅತ್ಯಂತ ಶಾಂತ ಸ್ವಾಭಾವಿಗಳು ಅಂತ ಇದರಲ್ಲೇ ಗೊತ್ತಾಗುತ್ತದೆ. ಆದರೆ ಕೆಲವರಿಗೆ ಇಲ್ಲಿ ಎಲ್ಲ ಸೌಲಭ್ಯ ಸಿಕ್ಕರೂ ಕೂಡ ನೆಲೆಸಲು ಭಯ ಆಗುತ್ತದೆ, ಅಸಹಿಷ್ಣುತೆ ಅಂತೆಲ್ಲ ಹೇಳುತ್ತಿದ್ದಾರೆ. ಇದೀಗ ಇವರೆಲ್ಲರ ಸಾಲಿಗೆ ಭಾರತದ ಕ್ರಿಕೆಟರ್ ಇರ್ಫಾನ್ ಪಠಾಣ್ ಕೂಡ ಸೇರಿದಂತೆ ಕಾಣುತ್ತಿದೆ. ಕಾರಣವೇನು?
ಐಪಿಎಲ್ ನ ಆವೃತ್ತಿ ಇದೀಗ ನಡೆಯುತ್ತಿದ್ದು ಎಲ್ಲವು ಉತ್ತಮವಾಗಿ ಸಾಗುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸೋಶಿಯಲ್ ಮೀಡಿಯಾ ವಾರ್ ಶುರುವಾಗಿದೆ. ಇದನ್ನು ಕೆಲವರು ರಾಜಕೀಯ ಪ್ರೇರಿತ ಅಂತಲೂ ಕರೆಯುತ್ತಿದ್ದಾರೆ. ಪಠಾಣ್ ಅವರ ಟ್ವೀಟ್ ನೋಡಿದಾಗ ಅದು ಹೌದು ಅಂತಲೂ ನಮಗೆ ಅನಿಸುತ್ತದೆ. ಇದಕ್ಕೆ ಪ್ರತಿಯಾಗಿ ಭಾರತದ ಸ್ಪಿನ್ನರ್ ಅಮಿತ್ ಮಿಶ್ರ ಕೂಡ ಪ್ರತಿಕ್ರಿಯೆ ನೀಡಿದ್ದು ಇದೀಗ ದೊಡ್ಡ ಸುದ್ದಿಯಾಗಿದೆ. ಅಷ್ಟಕ್ಕೂ ಇವರಿಬ್ಬರ ನಡುವಿನ ಟಾಕ್ ಸಮರವೇನು? ಏನು ಹಂಚಿಕೊಂಡಿದ್ದಾರೆ?
ಇರ್ಫಾನ್ ಖಾನ್ ತಮ್ಮ ಟ್ವಿಟ್ಟರ್ ಅಲ್ಲಿ ಟ್ವೀಟ್ ಮಾಡುವ ಮೂಲಕ “ನನ್ನ ದೇಶ, ನನ್ನ ಸುಂದರ ದೇಶ ಇಡೀ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ದೇಶವಾಗುವ ಸಾಮರ್ಥ್ಯ ಹೊಂದಿದೆ ಆದರೆ…” ಎನ್ನುವುದಾಗಿ ಎಂದು ಟ್ವೀಟ್ ಮಾಡಿ ಮುಂದೆ ಏನನ್ನು ಹೇಳದೆ ಪ್ರಶ್ನಾತೀರ್ಥವಾಗಿ ಟ್ವೀಟ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾ ದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತು. ಈ ಟ್ವೀಟ್ ನೋಡಿ ಕೆಲವರು ರಾಜಕೀಯ ಪ್ರೇರಿತ ಎಂದರೆ ಇನ್ನು ಕೆಲವರು ಬೇರೆ ಬೇರೆ ಅಭಿಪ್ರಾಯವನ್ನು ನೀಡಿದ್ದಾರೆ. ಇದಕ್ಕೆ ಅಮಿತ್ ಮಿಶ್ರ ಟ್ವೀಟ್ ತುಪ್ಪ ಸುರಿದಂತೆ ಮಾಡಿದೆ.
ಇರ್ಫಾನ್ ಪಠಾಣ್ ಅವರ ಈ ಟ್ವೀಟ್ ಅನ್ನು ಭಾರತದ ಆಟಗಾರ ಅಮಿತ್ ಮಿಶ್ರ ಪೂರ್ತಿ ಮಾಡಿದಂತೆ ಇತ್ತು ಇತ್ತು ಅವರ ಟ್ವೀಟ್. ಇದನ್ನು ಪಠಾಣ್ ಹಾಗು ಮಿಶ್ರ ನಡುವಿನ ಶೀತಲ ಸಮರ ಎಂದು ಹೇಳಿದರೆ ಇನ್ನು ಕೆಲವರು ಅಮಿತ್ ಮಿಶ್ರ ಅವರು ಪಠಾಣ್ ಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ. ಟ್ವೀಟ್ ನಲ್ಲಿ ಅಮಿತ್ ಮಿಶ್ರ ” ನನ್ನ ದೇಶ, ನನ್ನ ಸುಂದರ ದೇಶ ಇಡೀ ಜಗತ್ತಿನಲ್ಲಿ ಶ್ರೇಷ್ಠ ದೇಶ ಆಗುವ ಸಾಮರ್ಥ್ಯ ಹೊಂದಿದೆ ಆದರೆ ಕೆಲವರು ಸಂವಿದಾನವನ್ನು ನಾವು ಮೊದಲು ಪಾಲಿಸಬೇಕು ಎಂದು ತಿಳಿದುಕೊಂಡರೆ ಮಾತ್ರ ಸಾಧ್ಯ” ಎಂದು ಟ್ವೀಟ್ ಮಾಡುವ ಮೂಲಕ ಪಠಾಣ್ ಗೆ ಕೌಂಟರ್ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯಬಲ್ಲುದು ಎನ್ನುವುದು ನಾವು ನೋಡಬೇಕಿದೆ.